ಬೋಳು ಮರ

ಅಚ್ಚರಿಯ ನೋಟವದೇಕೆ
ನಿಟ್ಟುಸಿರ ಬಿಡುವಿರೇಕೆ
ಅರೆಗಳಿಗೆ ದಿಟ್ಟಿಸಿ ನೋಡಿರಿ
ಕಲಾವಿದನ ಕರಚಳಕದೆ
ಅವಿರ್ಭವಿಸಿದ ಕಲ್ಪನೆಯ ಚಿತ್ರವೇ
ದೇವನ ಸೃಷ್ಠಿಯ ವೈಚಿತ್ರವೇ
ಅಲ್ಲ ನಿಮ್ಮೆದುರು ನಿಂತಿರುವ
ನಾನೊಂದು ಬೋಳು ಮರ
ಗತ ಕಾಲದೆ ನಾನಾಗಿದ್ದೆ
ಫಲಭರಿತ ಸಂಪತ್ತಿನ ಆಗರ
ನನ್ನಡಿಯಲ್ಲಿ ನನ್ನೊಡಲಲ್ಲಿ
ಆಸರೆ ಪಡೆದ ಜೀವಿಗಳೆದೆಷ್ಟೋ
ಮುಗ್ಧ ಕಂದಮ್ಮಗಳು ನಕ್ಕು ನಲಿದು
ಕುಪ್ಪಳಿಸಿದ ದಿನಗಳೆಷ್ಟು,
ಅಶಾಂತಿಯಲಿ ಬೆಂದು ನೊಂದ
ಹೃದಯಗಳಿಗೆ ನೀಡಿದೆ ಸಾಂತ್ವನ
ನನ್ನುಸಿರ ಧಾರೆಯೆರೆದು
ನೀಡಿದೆ ಕ್ಷಣಕಾಲ ಚೇತನ
ಇಂದು ಸುಡು ಬಿಸಿಲು ಬಿರುಮಳೆಯಲಿ
ಕಾಲನಾಟದ ಆಟಿಕೆಯಾಗಿ
ಸ್ವಾರ್ಥ ಮಾನವನ ಕ್ರೌರ್ಯಕ್ಕೆ
ಸಾಕ್ಷಿಯಾಗಿ ಮೂಕವಾಗಿ
ಶೋಧಿಸುತಿಹೆನು ಏಕಾಂಗಿಯಾಗಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ಇಬ್ಬರಿಗೂ ಒಂದೇ ಬಾಣ
Next post ಶಿಕ್ಷೆ

ಸಣ್ಣ ಕತೆ

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

cheap jordans|wholesale air max|wholesale jordans|wholesale jewelry|wholesale jerseys